ಪೋಸ್ಟ್‌ಗಳು

ಶಿವನ ಅಜ್ಞಾತವಾಸಕ್ಕೆ ಅಂತ್ಯ ಹಾಡಿದ ಮಾತೋಶ್ರಿ ಅಹಲ್ಯಾ ಬಾಯಿ ಹೋಳ್ಕರ್..

ಇಮೇಜ್
        ರಾಜಮಾತೆ‌ ಅಹಲ್ಯಾಬಾಯಿ ಹೋಳ್ಕರ್     ಬಾಜಿರಾಯ ಪೇಶ್ವೆಯ ಸೇನಾಪತಿಗಳಲ್ಲೊಬ್ಬನಾದ ಮಲ್ಹಾರ ರಾವ್ ಹೋಳ್ಕರ್  ಉತ್ತರ ಭಾರತದ ದಿಗ್ವಿಜಯಗಳನ್ನು ಮುಗಿಸಿ, ಮರಳಿ ತನ್ನ  ರಾಜ್ಯಕ್ಕೆ ಹಿಂತಿರುಗುತ್ತಿದ್ದ. ಪೇಶ್ವೆಗಳ ರಾಜಧಾನಿ ಪುಣೆಗೆ ಸಮೀಪ ಚೌಂಡಿ ಎನ್ನುವ ಗ್ರಾಮದ ಹತ್ತಿರ ಬೀಡುಬಿಟ್ಟಿದ್ದ. ಹತ್ತಿರದ ಶಿವಾಲಯವೊಂದರಲ್ಲಿ ತುಂಬ ಜನ ನೆರೆದಿದ್ದರು. ಹೋಳ್ಕರನು ಮತ್ತವನ ಕೆಲವು ಸೈನಿಕರು ಶಿವ ದೇವಾಲಯಕ್ಕೆ  ದರ್ಶನಕ್ಕೆಂದು ಬಂದಿದ್ದರು. ಜನ ನೆರೆಯಲು ಕಾರಣ ಎನೆಂದು ಗಮನಿಸಿದಾಗ, ಅಲ್ಲೊರ್ವ ಎಂಟು ವರುಷದ ಹುಡುಗಿಯೊಬ್ಬಳು ಅಲ್ಲಿಗೆ ಬಂದಿದ್ದ ಭಕ್ತರಿಗೆಲ್ಲಾ ದಾನ ನೀಡುತ್ತಿದ್ದಳು.    ಆಕೆಯ ಚಟುವಟಿಕೆ, ದೈವಭಕ್ತಿ, ಜನರೊಂದಿಗೆ ನಡೆಸುತ್ತಿದ್ದ ಸಂವಾದ ಮಲ್ಹಾರ್ ರಾವ ಹೋಳ್ಕರನನ್ನು ತುಂಬ ಆಕರ್ಷಿಸಿತು. ಅಂತಹ ಒಬ್ಬ ರಾಜ್ಯದ ಆಡಳಿತಗಾರನನ್ನು ಮಂತ್ರಮುಗ್ದ ಮಾಡಿದವಳು ಬೇರೆ ಯಾರು ಅಲ್ಲ. ಅವಳೆ ಅಹಲ್ಯಾ ಬಾಯಿ ಹೋಳ್ಕರ್. ಭಾರತದ ಭೂಪಟದ ಮೇಲೆ ಮೋಘಲರ ದಬ್ಬಾಳಿಕೆ ಅಳಿದು ಸ್ವರಾಜ್ಯ ಆಡಳಿತ ಬೇರು ಬೀಡುತ್ತಿದ್ದ ಸಮಯವದು. ಮುಸ್ಲಿಮರ ಕಳೆದ ೩೦೦ ವರ್ಷಗಳ ಆಡಳಿತ ಭಾರತೀಯರನ್ನು ಹಿಂಡಿ ಹಿಪ್ಪೆಯಾಗಿ ಮಾಡಿತ್ತು. ಪ್ರಖ್ಯಾತ ಎನಿಸುವ ದೇವಾಲಯಗಳೆಲ್ಲಾ ಉರುಳಿಸಿ ಅಲ್ಲಿ ಮಸೀದಿಗಳನ್ನು ನಿರ್ಮಾಣ‌ ಮಾಡಲಾಗಿತ್ತು. ಭಾರತಿಯರ ದೈವಿಕತೆ ...

ಪ್ರತಿಭಾವಂತರ ಪ್ರೇಮ ವೈಫಲ್ಯ

ಇಮೇಜ್
ಪ್ರತಿಭಾವಂತರ ಪ್ರೇಮ ವೈಫಲ್ಯ                    [............................] ಜಮೀನಿನಲ್ಲಿ ಕಾರಂಜಾ‌ ನದಿ  ನೀರು ಹಾಯಿಸುತ್ತಿದ್ದೆ. ಬರಗಾಲದ ನಮ್ಮ ಜಿಲ್ಲೆಗೆ ಅದೊಂದು ಮಾತ್ರ ವರದಾನವಾಗಿದೆ. ಅಷ್ಟರಲ್ಲಿ ಫೋನ್ ರಿಂಗಣಿಸಿತು. ಹಸಿಕೆಸರಾದ ಕೈಗಳನ್ನು ಒರೆಸಿಕೊಂಡು ಬಂದ ಕರೆ ಸ್ವೀಕರಿಸಬೇಕೆಂದು ಅನ್ನುವಷ್ಟರಲ್ಲಿ ಕರೆ ನಿಂತಿತು. ಯಾವುದೂ ಹೊಸ ಸಂಖ್ಯೆ ಇದ್ದಿದರಿಂದ ತಿರುಗಿ ಕರೆ ಮಾಡಲಿಲ್ಲ. ಕೆಲ ನಿಮಿಷಗಳ ತರುವಾಯ ಮತ್ತದೆ ನಂಬರ್ ನಿಂದ ಫೋನ್ ಬಂದಿತು. ರಿಸೀವ್ ಮಾಡುತ್ತಿದ್ದಂತೆ ಆ ಕಡೆಯಿಂದ ಹಲೋ..... ಎನ್ನುವ ಗಂಡು ದನಿ. ನಾನು ಯಾರೆಂದು ಕೇಳಿದೆ. ಅವರು ತಾನು ಯಾರೆಂದು ಹೇಳದೆ ಮಾತನಾಡಲು ಆರಂಭಿಸಿದರು. ಹೇಗಿದಿಯಾ, ಮನೆಕಡೆಯಲ್ಲಾ ಆರಾಮಾ... ಪಕ್ಕಾ ಉತ್ತರ ಕರ್ನಾಟಕ ಭಾಷೆಯಿದ್ದರು ಅದರಲ್ಲಿ ಇಂಗ್ಲಿಷ್ ಮತ್ತು ಬೆಂಗಳೂರಿನ ಪದಗಳು ಯಥೇಚ್ಛವಾಗಿ ಸೇರಿದ್ದವು. ಸ್ವಲ್ಪ ಸಮಯದಂತರದಲ್ಲಿ ತಿಳಿಯಿತು.ನನ್ನ ಜೂನಿಯರ್ ಹುಡುಗ ಕರೆ ಮಾಡಿ ಮಾತಾಡುತ್ತಿದ್ದನು ನಾನು ಆರಾಮವಾಗಿ ಇದ್ದಿನಿ ನೀನು ಹೇಗಿದಿಯಾ ,ಮದುವೆ ಆಯ್ತಾ ಅಂತ ಕೇಳಿದೆ. ಮದುವೆ ಬಗ್ಗೆ ಕೇಳಿದ ತಕ್ಷಣ ಅವನ ಧ್ವನಿಯಲ್ಲಿ ಸ್ಪಷ್ಟ ಬದಲಾವಣೆ ಆಯಿತು. ಅಲ್ಲಿಯವರೆಗೂ ಅರಳು ಹುರಿದಂತೆ ಪಟ ಪಟನೆ ಮಾತನಾಡುತ್ತಿದ್ದ ಆತ ಈಗ ಸುಮ್ಮನೆ ವಿಚಿತ್ರ ಮೌನದಿಂದ ಹ್ಞೂಂ ಗುಡುತ್ತಿದ್ದನು. ಸ್ವಲ್ಪ ...

ಮಾನಸಿಕ ಒತ್ತಡ : ಸನ್ನಿವೇಶಗಳು ಮತ್ತು ನಿರ್ವಹಣೆ

ಇಮೇಜ್
ಮಾನಸಿಕ ಒತ್ತಡ :- ಸನ್ನಿವೇಶಗಳು ಮತ್ತು  ದೇಹದ ಮೇಲೆ ಪ್ರಭಾವ. ಎರಡು ದಿನಗಳ ಹಿಂದೆ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಸುದ್ದಿ ಕೇಳಿ ತೀವ್ರ ಆಘಾತವಾಯಿತು. ೩೫ ರ ಹರೆಯದ ಶಿಕ್ಷಕರೊಬ್ಬರು ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರಿಗೆ ವುಹಾನ್ ವೈರಸ್ ಅಂದರೆ ಕೋವಿಡ್-೧೯ ರ ಸೊಂಕು ತಗುಲಿತ್ತು. ಮೂಲಗಳ ಪ್ರಕಾರ ಸೊಂಕು ಅವರಿಗೆ ತಗುಲಿದ್ದರೂ ಸಹ ಅವರು ಗುಣಮುಖರಾಗುವ ಸಾಧ್ಯತೆಗಳು ಬಹಳಷ್ಟಿದ್ದವು. ವೈದ್ಯರು ಮತ್ತು ಕೋವಿಡ್ ಆಪ್ತ ಸಮಾಲೋಚಕರು ಅವರಿಗೆ ಧೈರ್ಯ ಹೇಳಿದರು ಸಹ ಅವರು ಮಾನಸಿಕವಾಗಿ ತೀವ್ರ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಯಂತಹ ದಾರಿ ಹಿಡಿದಿದ್ದರು, ಅವರು ಶಿಕ್ಷಕರಾಗಿದ್ದರು ಎಂಬುದು  ಇನ್ನೊಂದು ಸಹಿಸಲಾರದ ಅಂಶವಾಗಿತ್ತು. ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಸುದ್ದಿ. ಶಿಕ್ಷಣ, ಮೌಲ್ಯಗಳು ಮತ್ತು ನಾಗರಿಕತೆಯನ್ನು ಕಲಿಸುವ ಶಿಕ್ಷಕರೆ ಇಷ್ಟೊಂದು ಧೈರ್ಯಗೆಟ್ಟರೆ ಮಕ್ಕಳಿಗೆ ನಾವು ಇನ್ನೆಂತಹ ಶಿಕ್ಷಣ ನೀಡಬಹುದು??? ಎನ್ನವುದೊಂದು ಪ್ರಶ್ನೆಯಾದರೆ, ಆತ್ಮಹತ್ಯೆಯಂತಹ ಕನಿಷ್ಟತಮ ಕೃತ್ಯಕ್ಕೆ ಪ್ರೇರೆಪಿಸುವ ಒತ್ತಡ ನಿವಾರಣೆ ಇನ್ನೊಂದು ಮುಖ್ಯವಾದ ಸವಾಲಾಗಿ ನಿಂತಿದೆ. ನಾವೆಲ್ಲರೂ ನಮ್ಮ ಜೀವನದ ಒಂದಿಲ್ಲೊಂದು ಸಂದರ್ಭದಲ್ಲಿ ನಮ್ಮ ಅಸ್ತಿತ್ವಕ್ಕೆ ಮೀರಿದ ಒತ್ತಡವನ್ನು ಅನುಭವಿಸುತ್ತೆವೆ. ಇದು ನಮ್ಮ  ಸುತ್ತಮುತ್ತಲಿನ ಪರಿಸರ, ನಾವು ಮಾಡುವ ಕೆಲಸಗಳು, ಇಲ್ಲವೆ ನಮ್ಮ ಜೀವನ ವಿಧಾನ...

ಜೀವನದಲ್ಲಿ ತಡವಾಗಿ ಅರ್ಥವಾಗುವ ಸತ್ಯಗಳು

ಇಮೇಜ್
ಜೀವನದಲ್ಲಿ ತಡವಾಗಿ ಅರ್ಥವಾಗುವ ಪೂರ್ಣ ಸತ್ಯಗಳು :- ತುಂಬ ದಿನಗಳ ನಂತರ ಹಳೆಯ ಸ್ನೇಹಿತನೊಬ್ಬ ಭೇಟಿಯಾಗಿದ್ದ.ಅ ಕಾಲೇಜು ದಿನಗಳಲ್ಲಿ ಅವನೊಂಥರ ರಾಜಕುಮಾರ. ಅವನ ಸುತ್ತಲೂ ಹತ್ತಾರು ಜನ ಹುಡುಗರು. ಅವನ ಜೊತೆಗಿನ ಸ್ನೇಹದಲ್ಲಿ ಅದೆಷ್ಟು ಜನ ಮುಳುಗಿದ್ದರೂ ಗೊತ್ತಿಲ್ಲ. ಯಾವಾಗಲೂ ಕ್ಲಾಸಗೆ ಚಕ್ಕರ ಹಾಕಿ, ಅದು ಇದು ಅಂತ ತಿರುಗಾಡುತ್ತಿದ್ದದರಿಂದ ಅವನು ತರಗತಿಗೆ ಅಪರೂಪದವನಾಗಿದ್ದ. ಕ್ಲಾಸು, ಲೈಬ್ರರಿ, ವರ್ಕು ಅನ್ನೂದ್ರಲ್ಲೆ ಕಳೆದು ಹೊಗುತ್ತಿದ್ದ ನನ್ನೋಂದಿಗೆ ಅವನ ಸ್ನೇಹ ಅಷ್ಟಕ್ಕಷ್ಟೆ ಎಂಬಂತಿತ್ತು. ಆದರೆ ಈಗ ನನ್ನ ಎದುರು ಬಂದ ಹುಡುಗ ಅವನೆನಾ ಎನ್ನುವಷ್ಟು ಬದಲಾಗಿದ್ದ. ಚುಮು ಚುಮು ಮಳೆ ಬಿಳುತ್ತಿರುವುದರಿಂದ ಅಲ್ಲಿಯೆ ಪಕ್ಕದಲ್ಲಿದ್ದ ಟೀ ಅಂಗಡಿಯಲ್ಲಿ ಕುಳಿತೆವು. ಅವನು ಹೆಚ್ಚಿಗೆನು ಮಾತಾಡಲಿಲ್ಲ. ಮದುವೆ ಮಕ್ಕಳು ಹಾಗೆ ಹೀಗೆ ಕೇಳಿ ಹೋಗುತ್ತೆನೆಂದನು. ನಾನು ತಡೆಯಲಿಲ್ಲ. ಅವನು ಹೋದ ನಂತರ ಇನ್ನೊಂದು ಕಪ್ ಟೀ ಹಿರುತ್ತಾ ಅವನ ಜೊತೆ ಮಾತಾಡಿದ್ದನ್ನು ಮೆಲುಕು ಹಾಕಿದೆ. ಆತನ ಒಂದು ಮಾತು ಚೆನ್ನಾಗಿ ಜ್ಞಾಪಕಕ್ಕೆ ಉಳಿದಿತ್ತು.ಅದನ್ನೇ ಆಲೋಚಿಸಿದೆ. ಹೌದು ಮದುವೆ ಮಕ್ಕಳು ಸಂಸಾರದ ಜಂಜಡಗಳಲ್ಲಿ ಮುಳುಗಿದ್ದ ಆತನಿಗೆ ಈಗ ಜ್ಞಾನೊದಯವಾಗಿತ್ತು. ಬಹುತೇಕ ಎಲ್ಲರೂ ತಮ್ಮ ಬದುಕಿನ ಮಾಡುವ ಮೊದಲ ತಪ್ಪು ಅದು. ಜೀವನದ ಬಗೆಗೆ ಅಪಾರ ನೀರಿಕ್ಷೆಗಳನಿಟ್ಟುಕೊಂಡು ಪಡಿಬಾರದ ಪಡಿಪಾಟಲು ಅನುಭವಿಸುವ ಮೂಲಕ ತಮ್ಮ ಮೇಲೆ ತಾವೇ ಭ್ರಮನಿ...

ಹೇಮಿಯ ಗಂಡ

ಇಮೇಜ್
            (ಕುವೆಂಪು ತಮ್ಮ ಮಗು ಮತ್ತು ಮಡದಿ        ಹೇಮಾವತಿಯವರೊಂದಿಗೆ) ಸುಮಾರು ದಿನಗಳಿಂದ ಮನಸ್ಸು ವಿಪ್ಲವದಲ್ಲಿ ಮುಳುಗಿತ್ತು. ಯಾವುದರಲ್ಲಿ‌ ಸಹ ಆಸಕ್ತಿ ಇರಲಿಲ್ಲ. ಕೆಲಸ ದಣಿವು, ನಿದ್ರೆ ಇವುಗಳೆ ನನ್ನ ಸಂಗಾತಿಗಳಾಗಿಬಿಟ್ಟಿದ್ದವು. ನನ್ನವಳ ಕಿರಿ-ಕಿರಿಯಿಂದ ನನಗೆ ಸಾಕಾಗಿತ್ತು. ಪರಸ್ಪರ ಪ್ರೇಮಿಸಿ ಮದುವೆಯಾಗಿದ್ದರು ಸಹ ನಮ್ಮಲ್ಲಿ  ಸಹಸಂಗತಿಗಳು ಹೇರಳವಾಗಿ ಇರಲಿಲ್ಲ. ಅಸಹನೆ ಹೆಚ್ಚುತ್ತಿತ್ತು. ಇಬ್ಬರೂ  ನೌಕರರಾಗಿದ್ದರಿಂದಲೋ, ಸಮಯದ ಅಭಾವದಿಂದಲೋ ಎನೋ ಗೊತ್ತಿಲ್ಲ. ಇವತ್ತು ಬೆಳಿಗ್ಗೆ ಎದ್ದವನೆ ಅವನಿಗೆ ಕರೆ ಮಾಡಿದೆ. ಅವನಿಟ್ಟಿದ್ದ ಕಾಲರ್ ಟ್ಯೂನ್ ಕೇಳಿಯೆ ಮನಸ್ಸು ಸಮಾಧಾನವಾಗಬೇಕು. ಅಂತಹ ಟ್ಯೂನ್ ಅದು. ಆತ ಕರೆ ಸ್ವೀಕರಿಸಿ ಮಾತನಾಡಿದ. ಸಾಯಂಕಾಲ ಸಿಗುವೆಯಾ?? "ಖಂಡಿತ " ಆ ಕಡೆಯಿಂದ ಉತ್ತರ ಬಂದಿತು. ಅಷ್ಟೇ ಕರೆ ಮುರಿಯಿತು. ಚನ್ನಬಸವ ಕೆರೆ, ನಾನಿರುವ ಪಟ್ಟಣದ ಬಹುತೇಕ ಬಾವಿ, ಕೊಳವೆ ಬಾವಿಗಳ ಜೀವದಾಯಿನಿ. ಇದು ಬಯಲು ಸೀಮೆಯ ಈ ಪಟ್ಟಣದಲ್ಲಿ‌ ನೀರಿನ ಸಮಸ್ಯೆಯನ್ನು ಕಡಿಮೆ ಮಾಡಿದೆ. ಇತ್ತಿಚಿಗೆ ಆ ಕೆರೆಯ ಒಡ್ಡನ್ನು ಮತ್ತಷ್ಟು ಎತ್ತರಕ್ಕೆರಿಸಿ ಅದರ ಮೇಲೆ ಡಾಂಬರು ರಸ್ತೆ ಮಾಡಿದ್ದಾರೆ. ಬೆಳಿಗ್ಗೆ ಮತ್ತು ಸಾಯಂಕಾಲ ಅಲ್ಲಿ ಜನ ವಾಯುವಿಹಾರಕ್ಕೆ ಬರುತ್ತಾರೆ. ನಾವಿಬ್...