ಪೋಸ್ಟ್‌ಗಳು

ಫೆಬ್ರವರಿ, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವಿಜ್ಞಾನದ ಮೂಲವೆ ಪ್ರಶ್ನೆ ಮಾಡುವ ಕುತೂಹಲಕರ ಮನಸ್ಸು...

ಇಮೇಜ್
ವಿಜ್ಞಾನದ ಮೂಲವೆ ಪ್ರಶ್ನೆ ಮಾಡುವ ಕುತೂಹಲಕರ ಮನಸ್ಸು ಡಾ! ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮುಂದಾಳತ್ವದಲ್ಲಿ ರೂಪಿಸಿದ ಸಂವಿಧಾನದ ಮೂಲ ಆಶಯಗಳಲ್ಲಿ ಪ್ರಶ್ನಿಸುವುದು ಒಂದು ಬಹು ಮುಖ್ಯ ಅಂಶ. ಅಲ್ಲದೆ ನಮ್ಮದೆ ಪ್ರಪ್ರಾಚೀನ ತತ್ವಜ್ಞಾನದ ರೂಪಗಳಾಗಿರುವ ಉಪನಿಷತ್ತುಗಳು ಇರುವುದು ಪ್ರಶ್ನೋತ್ತರಗಳ ಮಾದರಿಯಲ್ಲೆ. ಸಹಸ್ರಾರು ಜನರು ಗೌರವಿಸುವ   ನಮ್ಮ ಭಗವದ್ಗೀತೆ ಇರುವುದು ಪ್ರಶ್ನೋತ್ತರದ ರೂಪದಲ್ಲೆ, ಬೌದ್ದ ಸಾಹಿತ್ಯದ ಬಹುಭಾಗ ಇರುವುದು, ಮುಖ್ಯ ಗ್ರಂಥವಾದ ಮಿಲಿಂದ ಪನ್ಹಾ ಇರುವುದು ಪ್ರಶ್ನೋತ್ತರದ ಮಾದರಿಯಲ್ಲೆ.  ಯಾವಾಗ ನಾವು ಪ್ರಶ್ನೆ ಮಾಡುವುದನ್ನು ಬಿಟ್ಟು ಬಿಡುತ್ತೆವೆಯೋ ಆವಾಗ ನಮ್ಮ  ಬೌದ್ದಿಕ ವಿಕಾಸ ನಿಂತುಬಿಡುತ್ತದೆ. ಮೌಡ್ಯತೆ ಮೂಡುವುದು ವ್ಯಕ್ತಿಗತವಾಗಿ ಆಲೋಚನಾ ಶಕ್ತಿ ಕಳೆದುಕೊಂಡಾಗ, ಯಾರೋ ಒಬ್ಬ ಪ್ರಭಾವಿ ಹೇಳುವುದನ್ನೆ ವೇದವಾಕ್ಯ ಎಂದು ಪರಿಭಾವಿಸಿದಾಗ, ಅಲ್ಲಿಗೆ ನಮ್ಮ ಸ್ವಂತಿಕೆಯ ಅಧಃ ಪತನದ ಆರಂಭವಾಗುವುದು. .. _ಅಂತಸತ್ವ ಶಕ್ತಿಶಾಲಿಯಾಗಿ ಇರುವ ಯಾವನೂ ಸಹ ಖಂಡಿತ ಪ್ರಶ್ನೆ ಮಾಡದೆ ಯಾವುದನ್ನೂ ಒಪ್ಪಿಕೊಳ್ಳಲಾರ_ , _ಸ್ವೀಕರಿಸಲಾರ_.   ಇಲ್ಲದವ ಮಾತ್ರ ಕತ್ತಲಲ್ಲಿ ಕುರುಡನೆ ದಾರಿ ತೋರುತ್ತಿದ್ದಾನೆ ಎಂಬ ಭಾವದೊಂದಿಗೆ ನಡೆಯುತ್ತಾನೆ.. ಅದು ಅವನ ವ್ಯಯುಕ್ತಿಕ ನಷ್ಟವಲ್ಲದೆ, ಆತನನ್ನೆ ಅವಲಂಬಿಸಿರುವ ವ್ಯವಸ್ಥೆಯ ನಷ್ಟವೂ ಹೌದು. ಪ್ರಶ್ನೆ ಮಾಡದೆ ಮಾಡುವ ವ್ಯಕ್ತಿಪೂಜೆ ಪ್...