ಪೋಸ್ಟ್‌ಗಳು

ಜುಲೈ, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವೀರಶೈವ ಹಾಗೂ ವಿರಕ್ತ ಮಠಗಳಿಗೆ ಮಾದರಿ ಭಾಲ್ಕಿ ಹಿರೇಮಠ

ಇಮೇಜ್
  ವೀರಶೈವ ಹಾಗೂ ವಿರಕ್ತ ಮಠಗಳಿಗೆ ಮಾದರಿ ಭಾಲ್ಕಿಯ ಹಿರೇಮಠ ಸಂಸ್ಥಾನ ಮಠ           ಸ್ವಲ್ಪ ಕಲ್ಪಿಸಿಕೊಳ್ಳಿ, ನಿಮ್ಮದೆ ಆದ ಮನೆ , ಅದು ಪೂರ್ವಜರು ಬಾಳಿ ಬೆಳಗಿದ ಮನೆ. ಆದರೆ ನಿಮ್ಮ ಕಾರ್ಯಕ್ಷಮತೆ ಹಾಗೂ ನಿಮ್ಮ ದಯಾಪರ ನೀತಿಯಿಂದಾಗಿ     ನಿಮ್ಮದೆ ಮನೆಯಲ್ಲಿ ನೀವುಗಳು ಎರಡನೆ ದರ್ಜೆಗೆ ಇಳಿದಿದ್ದಿರಿ. ಅಲ್ಲದೆ ಪ್ರತಿಯೊಂದು ಅಂಶಕ್ಕೂ ನೀವು ಆ ನಿಮ್ಮ ನೆಂಟರಿಷ್ಟರ ಅನುಮತಿ ಪಡೆಯಬೇಕಾಗಿದೆ. ನೆನಪಿಡಿ. ಅದು ನಿಮ್ಮದೆ ಮನೆ. ನಿಮ್ಮದೆ ಪೂರ್ವಜರ ಮನೆ.   ನಿಮ್ಮ ಮನಸ್ಥಿತಿ ಹೇಗಾಗಿರಬೇಡ.       ಇಂತಹ ಪರಿಸ್ಥಿತಿಯನ್ನು ಇಡಿ ಕನ್ನಡ ನಾಡಿಗೂ ಸಹ ಅನ್ವಯಿಸಿಕೊಳ್ಳಿ. ನಿಮ್ಮದೆ ನಾಡು, ನಿಮ್ಮ ಪೂರ್ಜಜರು   ನೀಡಿ ಹೋದ ಸಾಂಸ್ಕೃತಿಕ   ಅಸ್ಮಿತೆಯನ್ನು ನೀವು ಮುಂದುವರೆಸಲೆಬೇಕು ಏನ್ನುವ ನಿಮ್ಮ ಮನಸ್ಥಿತಿಗೆ ನಿಮ್ಮಲ್ಲೆ ಇರದ ಒಗ್ಗಟ್ಟು ದಾರಿಗಡ್ಡವಾಗಿ ನಿಂತಿದೆ.   ಸಾವಿರಾರು ವರುಷಗಳಿಂದ ಓತಪ್ರೋತವಾಗಿ ಹರಿದು ಬಂದಿರುವ ನಿಮ್ಮ ಭಾಷೆಯ ಸಾಹಿತ್ಯ ಸಂಸ್ಕೃತಿ ಆಕ್ರಮಣಕಾರರಾಗಿ ಈ   ನಾಡಿನ ಮೇಲೆ ಧಾಳಿ ಎಸಗಿದ ವ್ಯಕ್ತಿಗಳಿಂದ ಹಾನಿಗೊಳಗಾಗುತ್ತಿದೆ. ಈ ವಿಷಯಗಳನ್ನು ಕುರಿತಾದ ವಿಷಯಗಳನ್ನು ಮಾತಾಡಿದರೆ ನಿಮ್ಮನ್ನೆ ದೂಷಿಸುವಂತಹ ವ್ಯವಸ್ಥೆ ಇದೆ.        ಇದನ್ನೆಲ್ಲಾ ಗಮನಿಸಿದರೆ ನೀವು ನಿಮ್ಮದೆ ನಾಡಿ...

ಎರಡು ಯಜಮಾಾರ ಕುದುರೆ ಹಾಗೂ ದಾಂಪತ್ಯ ಗೀತೆ.....

ಇಮೇಜ್
ಎರಡು ಯಜಮಾನರ ಕುದುರೆ ಏಕೆ ಸೊರಗುತ್ತದೆ? – ಒಂದು ಕುಟುಂಬ ಕಲಿಸುವ ಪಾಠ   ಹೀಗೆ ಜೀವನ ನಡೆಯುತ್ತಿರುತ್ತದೆ. ಎಲ್ಲವೂ ಉತ್ತಮವಾಗಿಯೆ ಸಾಗುತ್ತಿದೆ ಎಂದಾಗ ಅಕಸ್ಮಾತ್ ಆಗಿ ಏನೋ ಒಂದು ಘಟಿಸುತ್ತದೆ. ಆ ಕ್ಷಣದಲ್ಲಿ ನೀವು ಆ ಘಟನೆ ಬಗ್ಗೆ ಮಾತ್ರ ಯೋಚಿಸುತ್ತಿರಿ. ಆದರೆ ಆ ಘಟನೆ ಜರುಗಲು ಬಹು ಹಿಂದಿನಿಂದಲೆ ಒಂದು ಹಲವಾರು ಕಾರಣಗಳು ಸುಪ್ತವಾಗಿ ಕಾರ್ಯ ನಿರ್ವಹಿಸುತ್ತಿರುತ್ತವೆ. ಕುಟುಂಬವನ್ನೆ ತೆಗೆದುಕೊಳ್ಳಿ. ಎಲ್ಲವೂ ಚೆನ್ನಾಗಿದೆ ಅನ್ನುವಷ್ಟರಲ್ಲಿ ಏನೋ ಅಚಾತುರ್ಯ ನಡೆದು ಬಿಡುತ್ತದೆ. ಆದರೆ   ಕುಟುಂಬವೂ ಒಂದು ಪುಟ್ಟ ರಾಜ್ಯವಿದ್ದಂತೆ. ಆ ರಾಜ್ಯದಲ್ಲಿ ಪ್ರೀತಿ ಇರುತ್ತದೆ, ಜವಾಬ್ದಾರಿಗಳು ಇರುತ್ತವೆ, ಕನಸುಗಳಿರುತ್ತವೆ, ಭಿನ್ನಾಭಿಪ್ರಾಯಗಳೂ ಇರುತ್ತವೆ. ಆದರೆ ಇವೆಲ್ಲವನ್ನೂ ಮೀರಿ ಆ ಕುಟುಂಬವನ್ನು ಒಂದಾಗಿ ಹಿಡಿದಿಡುವ ಶಕ್ತಿ ಯಾವುದು ಎಂದರೆ ಸ್ಪಷ್ಟತೆ ಮತ್ತು ಪರಸ್ಪರ ವಿಶ್ವಾಸ . ಒಂದು ಹಳೆಯ ಗಾದೆಯನ್ನು ನೆನಪಿಸಿಕೊಳ್ಳಬಹುದು, "ಎರಡು ಯಜಮಾನರಿರುವ ಕುದುರೆ ಯಾವಾಗಲೂ ಸೊರಗಿರುತ್ತದೆ; ಇಬ್ಬರು ನಾಯಕರು ನಡೆಸುವ ಹಡಗು ಮುಳುಗುತ್ತದೆ." ಮೊದಲ ನೋಟಕ್ಕೆ ಇದು ಕುದುರೆ ಮತ್ತು ಹಡಗಿನ ಕಥೆಯಂತೆ ಕಾಣಬಹುದು. ಆದರೆ ನಿಜವಾಗಿ ಇದು ಕುಟುಂಬದ ಬದುಕನ್ನು ಕನ್ನಡಿಯಂತೆ ತೋರಿಸುವ ಜೀವನದ ತತ್ವ. ಒಂದು ಮನೆಯಲ್ಲಿರುವ ಐದು ವರ್ಷದ ಮಗನನ್ನು ಊಹಿಸಿಕೊಳ್ಳಿ. ತಂದೆ, "ಪ್ರತಿದಿನ ಒಂದು ಗಂಟೆ ಓದು" ಎಂದು ಹೇಳುತ್...